ಸುದ್ದಿಬಿಂದು ಬ್ಯೂರೋ ವರದಿ
ಹಳಿಯಾಳ : ಪಟ್ಟಣದ ಹತ್ತಿರದಲ್ಲಿರುವ ತಿಮ್ಮಾಪುರ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕನೋರ್ವ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಪಟ್ಟಣದ ಯಲ್ಲಾಪುರ ನಾಖಾ ನಿವಾಸಿ ಖಾಜಾ ಬೇಪಾರಿಯವರ 13ವರ್ಷದ ನವಾಜ್ ಖಾಜಾ ಬೇಪಾರಿ ಎಂಬವನೆ ಮೃತಪಟ್ಟ ಬಾಲಕನಾಗಿದ್ದಾನೆ. ಈತ ಈಜಲೆಂದು ಕೆರೆಗೆ ಇಳಿದಿದ್ದ ಸಮಯದಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಸಿಪಿಐ ಜೈಪಾಲ್ ಪಾಟೀಲ್, ಪಿಎಸ್ಐ ಗಳಾದ ವಿನೋದ್ ರೆಡ್ಡಿ ಮತ್ತು ಕೃಷ್ಣಗೌಡ ಅರೆಕೇರಿ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ