ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ: ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಭಾರತಿ ನಾಯ್ಕ ಅವರಿಗೆ 2025ನೇ ಸಾಲಿನ ಮುಖ್ಯಮಂತ್ರಿಗಳ ಪದಕ‌ (CM Medal 2025)ಲಭಿಸಿದೆ.

 ಇಲಾಖೆಯಲ್ಲಿ ಉತ್ತಮ ಸೇವೆ ಹಾಗೂ ರಾಷ್ಟ್ರೀಯ ಮಟ್ಟದ(National Sports) ಇಲಾಖಾ ಕ್ರೀಡಾಕೂಟದಲ್ಲಿ ಅವರ ಉತ್ತಮ ಸಾಧನೆ ಗುರುತಿಸಿದ ಸಿಎಂ ಪದಕ‌ ಘೋಷಣೆ‌ ಮಾಡಲಾಗಿದೆ. ಭಾರತೀ ನಾಯ್ಕ ಅವರು ಮೂಲತಃ ಕುಮಟಾ ತಾಲೂಕಿನ ಬೆಟ್ಕುಳಿಯವರಾಗಿದ್ದು, ಜನಾರ್ಧನ ನಾಯ್ಕ ಅವರ ಪುತ್ರಿಯಾಗಿರುವ ಇವರು ವಿವಾಹಿತೆಯಾಗಿದ್ದು, ಹೆಗಡೆಯಲ್ಲಿ ನೆಲೆಸಿದ್ದಾರೆ.

ಅವರು ಹಾಲಿ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಕರ್ತವ್ಯನಿಷ್ಠೆ, ಶಿಸ್ತು ಮತ್ತು ಕ್ರೀಡಾ ಪ್ರತಿಭೆಯಿಂದ ಇಲಾಖೆಗೆ ವಿಶೇಷ ಕೀರ್ತಿ ತಂದಿದ್ದಾರೆ.ಭಾರತೀ ನಾಯ್ಕ ಸಾಧನೆಗೆ ಸ್ಥಳೀಯರು, ಸಹೋದ್ಯೋಗಿಗಳು, ಕುಟುಂಬಸ್ಥರು ಹಾಗೂ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ/ಐಫೋನ್ ಹಣ ಕೇಳಿದ್ದಕ್ಕೆ ‘ಖಾಸಗಿ ವಿಡಿಯೋ’ ಬೆದರಿಕೆ: ಭಟ್ಕಳದಲ್ಲಿ ಸೈಬರ್ ಬ್ಲ್ಯಾಕ್‌ಮೇಲ್ ಪ್ರಕರಣ!