ಸುದ್ದಿಬಿಂದು ವಿಶೇಷ ವರದಿ
ಬೆಂಗಳೂರು: ರಾಜ್ಯದಲ್ಲಿ ಯಶಸ್ವಿನಿ ಆರೋಗ್ಯ ಯೋಜನೆ ಎಂಬುದು  ಬಹುದೊಡ್ಡ ಹಗರಣ ಎನ್ನಲಾಗುತ್ತಿದ್ದು,‌ ಉಚಿತ ಆರೋಗ್ಯ ಎಂಬ ಹೆಸರಲ್ಲಿ‌‌ ಸರಕಾರ ರಾಜ್ಯದ ಬಡ ಜನರಿಂದ ಹಣ ಪಡೆದುಕೊಂಡರು ಕಾರ್ಡ್ ಸಿಕ್ಕವರಿಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಇರೋ ಕಾರಣಕ್ಕೆ ಈ‌ ಭಾರೀ ರಾಜ್ಯದ ಹೆಚ್ಚಿನ ಜನರು ಕಾರ್ಡ್ ನವೀಕರಣಕ್ಕೆ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.

ಈಗಾಗಲೇ ಗ್ಯಾರಂಟಿ ಯೋಜನೆಗಳಿಗೆ ನೀಡಲು ಸರಕಾರದ ಬಳಿ ಹಣ ಇಲ್ಲದಂತಾಗಿದ್ದು, ರಾಜ್ಯದಲ್ಲಿ ಅಭಿವೃದ್ದಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಹೀಗಾಗಿ ಸರಕಾದ ಖಜಾನೆ ಖಾಲಿಯಾಗಿರುವುದರಿಂದ ಯಾವೇಲ್ಲಾ ಮಾರ್ಗದಿಂದ ಜನರಿಂದ ಹಣ ಸುಲಿಯಲು ಸಾಧ್ಯವೋ ಆ ಎಲ್ಲ ಮಾರ್ಗದಲ್ಲಿ ಹಣ ಸೂಲಿಯುವ ಕೆಲಸ ಸರಕಾರ ಮಾಡುತ್ತಿದೆ ಎಂಬ ಆರೋಪ‌ ಕೇಳಿಬರುತ್ತಿದೆ,  ಅದೆ ಭಾಗವಾಗಿ ಯಶಸ್ವಿ‌ನಿ ಆರೋಗ್ಯ ಕಾರ್ಡ್ ನವೀಕರಣ ಹೆಸರಲ್ಲಿ ಸರಕಾರ ಈಗ ಒಂದಿಷ್ಟು ಹಣ ಬಾಚುವ ಕೆಲಸಕ್ಕೆ  ಮುಂದಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ‌ಕೇಳಿಬರುತ್ತಿದೆ.ಆರೋಗ್ಯದ ಹೆಸರಲ್ಲಿ‌ ಜನರ ಹಣ ಲೂಟಿ ಹೊಡೆಯುತ್ತಿದ್ದರೂ  ಈ ಬಗ್ಗೆ ಪ್ರತಿಪಕ್ಷ ನಾಯಕರು ಯಾವುದೇ ಚರ್ಚೆ ನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ..

ಬಿಜೆಪಿ ಸರಕಾರದಲ್ಲೂ ಇದೇ ಸಮಸ್ಯೆ?
ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಯಶಸ್ವಿನಿ ಯೋಜನೆ ಸಂಬಂಧಿಸಿ ಇದೆ ರೀತಿಯ ಪರಿಸ್ಥಿತಿ ಇತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲೇ ಇಂದಿನ ಪ್ರತಿಪಕ್ಷದ ನಾಯಕರು ಸಹ ಈ ಬಗ್ಗೆ ಮೌನವಹಿಸಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.‌ ಯಶಸ್ವಿ ಯೋಜನೆಯಲ್ಲಿ ಈಗ ಕೇಳಿಬರುತ್ತಿರುವ ಆರೋಪಗಳ ಬಗ್ಗೆ ತಾವೇನಾದರೂ ಧ್ವನಿ ಎತ್ತಿದ್ದರೆ ನಮ್ಮ ಆಡಳಿತದಲ್ಲೂ ಆಗಿರುವ ತಪ್ಪನ್ನ ಎತ್ತಿಹಿಡಿಯಬಹುದು ಎಂದು ಪ್ರತಿಪಕ್ಷದ ನಾಯಕರು ಮೌನವಾಗಿದ್ದಾರೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಈ ವಿಚಾರದಲ್ಲಿ ಸರ್ಕಾರದಿಂದ ಯಾವುದೇ ಸ್ಪಷ್ಟನೆ ಇಲ್ಲ,ಪ್ರತಿಪಕ್ಷದಿಂದ ಒತ್ತಡ ಸಹ ಇಲ್ಲ—ಈ ಸ್ಥಿತಿ ಜನರಲ್ಲಿ ಸಹಜವಾಗಿ ಅನುಮಾನ ಹುಟ್ಟಿಸುವಂತೆ ಮಾಡಿರುವುದು ಸುಳ್ಳಲ್ಲ. ಜನರ ಆರೋಗ್ಯದ ವಿಚಾರದಲ್ಲಿ ಪ್ರತಿಪಕ್ಷ ನಾಯಕರು ಮೌನವಾಗಿರುವುದು ತೀವ್ರ ಟೀಕೆಗೆ ಸಹ ಗುರಿಯಾಗುತ್ತಿದೆ. ಸರ್ಕಾರದ ತಪ್ಪುಗಳನ್ನು ಪ್ರಶ್ನಿಸಿ ಜನರ ಪರವಾಗಿ ನಿಲ್ಲುವುದು ಪ್ರತಿಪಕ್ಷದ ಕರ್ತವ್ಯವಾಗಿದ್ದರೂ, ಈ ವಿಚಾರದಲ್ಲಿ ಮೀನಾಮೇಷಾ ಏಟಿಸುತ್ತಿರುವುದನ್ನ ನೋಡಿದ್ದರೆ. ಈ ಹಗರಣದಲ್ಲಿ ಆಡಳಿತ ಹಾಗೂ ವಿರೋಧ ಎರಡು ಪಕ್ಷಗಳೂ ಈ ಹಗರಣದಲ್ಲಿ ಕೈ ಜೋಡಿಸಿರುವುದನ್ನ ಯಾರೂ ತಳ್ಳಿ ಹಾಕುವಂತಿಲ್ಲ.‌ಆದರೆ ಅದು ಏನೆ ಇದ್ದರೂ ಬಡ ಜನರ ಆರೋಗ್ಯದ ಹೆಸರಲ್ಲಿ‌ ಚಲ್ಲಾಟ ಮಾಡೋದು ಸರಿಯಲ್ಲ.

ಇದನ್ನೂ ಓದಿ/ ಗೋವನ್ನು ಕೊಂದು ಮಾಂಸ ಕಳವು : ಹೊನ್ನಾವರದಲ್ಲಿ ಘಟನೆ