ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ :  ಪಟ್ಟಣದ ಮಾಸ್ತಿಕಟ್ಟೆ ಸರ್ಕಲ್‌ ಸೇರಿಸದಂತೆ ಹಲವು ಕಡೆಯಲ್ಲಿ ಪಾಳುಬಿದ್ದಿದ ಕುಡಿಯುವ ನೀರಿನ ಘಟಕವನ್ನ ಪುರಸಭೆಯುವರು ದುರಸ್ತಿ ಪಡಿಸುವ ಮೂಲಕ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಕರ್ಯವನ್ನು ಕಲ್ಪಿಸಿದ್ದಾರೆ.

ಕುರಿತಾಗಿ ನಿಮ್ಮ ಸುದ್ದಿಬಿಂದು ನ್ಯೂಸ್ ಕುಡಿಯಲು ನೀರೂ ಇಲ್ಲ, ನಿರ್ವಹಣೆಯೂ ಇಲ್ಲ ಕುಮಟಾ ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು? ಎಂಬ ಶಿರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ಎಚ್ಚೇತ್ತುಕೊಂಡ ಇಲ್ಲಿನ ಪುರಸಭೆ ಪಾಳುಬಿದ್ದ ಮೂರು ಕುಡಿಯುವ ನೀರಿನ ಘಟಕವನ್ನ  ದುರಸ್ಥಿ ಮಾಡಿದೆ. ಇದು ಸುದ್ದಿಬಿಂದು ನ್ಯೂಸ್‌ನ ಬಿಗ್ ಇಂಪ್ಯಾಕ್ಟ್ ಆಗಿದೆ.

ಪಟ್ಟಣದ ಮಾಸ್ತಿಕಟ್ಟಾ ಸರ್ಕಲ್, ಗಿಬ್ ಸರ್ಕಲ್ ಹಾಗೂ ಪಿಕ್ ಆಪ್ ಬಸ್‌ನಿಲ್ದಾಣದ  ಬಳಿ 2008-09ನೇ ಸಾಲಿನ‌ ಎಸ್.ಎಫ್.ಸಿ. ಯೋಜನೆಯಡಿ ನಾಗರಿಕರಿಗಾಗಿ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿ ಜನರ ದಾಹ ತೀರಿಸುವ ಸತ್ಕಾರ್ಯ ಮಾಡಿದ್ದರು. ಆದರೆ ಈ ಟ್ಯಾಂಕುಗಳು ರೋಗ ಹರಡುವ ಸೊಳ್ಳೆ ನಿರ್ಮಾಣ ಕೇಂದ್ರಗಳಾಗಿತ್ತು. ಈ ಬಗ್ಗೆ ವಿಶ್ವ ಮಾನವ ಹಕ್ಕುಗಳ ರಕ್ಷಣೆ ಕುಮಟಾ ಘಟಕದ ಉಪಾಧ್ಯಕ್ಷರಾದ ಅಣ್ಣಪ್ಪ ನಾಯ್ಕರು ಸುದ್ದಿಬಿಂದು ಗಮನಕ್ಕೆ ತಂದಿದ್ದರಿಂದದ ಈ ಬಗ್ಗೆ ಸುದ್ದಿ ಪ್ರಕಟಸಿಲಾಗಿತ್ತು.

ಸುದ್ದಿಬಿಂದು ವರದಿಗೆ ಸ್ಪಂದಿಸಿದ ಪುರಸಭೆ ಅಧಿಕಾರಿಗಳು ಈ ನೀರಿನ ಘಟಕವನ್ನು ದುರಸ್ತಿಗೊಳಿಸಿ, ಸುಣ್ಣಬಣ್ಣ ಬಳಿಯುವ ಮೂಲಕ ಕಂಗೊಳಿಸುವಂತೆ ಮಾಡಿದ್ದಾರೆ. ಅಲ್ಲದೇ ಕುಡಿಯುವ ನೀರಿನ ಪೂರೈಕೆಯನ್ನು ಕೂಡ ಜನಸಾಮಾನ್ಯರಿಗೆ ಲಭಿಸುವಂತೆ ವ್ಯವಸ್ಥೆ ಮಾಡಿದ್ದಾರೆ. ಪುರಸಭೆಯ ಈ ಜನಪರ ಕಾರ್ಯಕ್ಕೆ ಹಾಗೂ ಸುದ್ದಿಬಿಂದು ನ್ಯೂಸ್‌ನ ಜನಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ/“ಮಾಸ್ತಪ್ಪ ನಾಯ್ಕ ಹೇಳಿಕೆಗಳೆಲ್ಲವೂ ಬರೀ ಸುಳ್ಳು” ‘ಮಾಂಕಾಳು ವೈದ್ಯರನ್ನು ಗುರಿಯಾಗಿಸಿ ಸಂಚು : ಕಾಂಗ್ರೇಸ್ ಆರೋಪ