ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಬೈಲೂರಿನಲ್ಲಿ ನಡೆದ ಘಟನೆಯು ವ್ಯವಸ್ಥಿತ ಸಂಚು ಎಂದು ಅನಂತ್ ಮೂರ್ತಿಯವರಿಗೆ ತಿಳಿದಿದೆ ಎಂದಾದರೆ ಆ ಸಂಚು ರೂಪಿಸಿದವರು ಯಾರು? ಎಂಬುದನ್ನು ಅನಂತ್ ಮೂರ್ತಿ ಅವರು ಬಹಿರಂಗ ಪಡಿಸಬೇಕು ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರ ಪ್ರಸನ್ನ ನಾಯ್ಕ್ ಹೇಳಿದ್ದಾರೆ.
ಅನಂತ್ ಮೂರ್ತಿಯವರೇ ಪ್ರಚಾರಕ್ಕಾಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನ ಕೆಡಿಸಲು ಈ ಕೃತ್ಯವನ್ನು ಯಾಕೆ ಮಾಡಿಸಿರಬಾರದು? ಈ ಹಿಂದೆಯೂ ಸಹ ಉಸ್ತುವಾರಿ ಸಚಿವ ಮಾಂಕಾಳು ವೈದ್ಯರ ವಿರುದ್ದ ಸಾರಿಗೆ ಬಸ್ ಗಳ ವಿಷಯದಲ್ಲಿ ಸುಳ್ಳು ಅಪಪ್ರಚಾರ ಮಾಡಿದ್ದರು ನಂತರ ತಾವೇ ಪತ್ರಿಕಾ ಘೋಷ್ಟಿಯಲ್ಲಿ ದಾಖಲೆಗಳನ್ನು ಕೊಡುವ ಸಂಧರ್ಭದಲ್ಲಿ ಸತ್ಯ ಹೊರಬಂದಿತ್ತು.
ಅನಂತ್ ಮೂರ್ತಿಯವರು ಮರಳಿ ಪ್ರಯತ್ನವ ಮಾಡು ಎಂಬ ಮಾತಿನೊಂದಿಗೆ ಪುನಃ ಉಸ್ತುವಾರಿ ಸಚಿವರ ವಿರುದ್ಧ ಅಪಪ್ರಚಾರಕ್ಕೆ ಇದೆಲ್ಲ ಮಾಡಿಸುತ್ತಿರುವಂತೆ ನಮಗೆ ಅನುಮಾನವಿದೆ, ಸ್ವತಃ ಅನಂತ್ ಮೂರ್ತಿಯವರೇ ಇದೊಂದು ವ್ಯವಸ್ಥಿತ ಸಂಚು ಎಂದು ಹೇಳಿರುವುದರಿಂದ ಪೊಲೀಸ್ ಇಲಾಖೆ ಅನಂತ್ ಮೂರ್ತಿಯವರನ್ನ ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತೇವೆ.
ಜಿಲ್ಲೆಯಲ್ಲಿ ಗೋ ಸಾಗಟ,ದರೋಡೆ ಗಾಂಜಾ ಮಾಫಿಯಗಳು ರಾಜಾರೋಷವಾಗಿ ನಡೆಯುತ್ತಿರುವುದು ಅನಂತ್ ಮೂರ್ತಿಯವರಿಗೆ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ದೂರು ನೀಡದಿರುವುದು ಯಾಕೆ? ಅಥವಾ ಆ ಮಾಫಿಯಗಳಲ್ಲಿ ತಾವು ಪಾಲುದಾರರೇ? ಒಂದು ನಿರ್ದಿಷ್ಟ ಧರ್ಮ ಮತ್ತು ಅವರ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿ ಪತ್ರಿಕಾ ಹೇಳಿಕೆ ನೀಡಿರುವ ಅನಂತ್ ಮೂರ್ತಿ ಅವರ ಉದ್ದೇಶವೇನು..? ಜಿಲ್ಲೆಯ ಕೋಮುಸೌಹಾರ್ದತೆ ಕೆಡಿಸಿ ಅಶಾಂತಿ ಸೃಷ್ಟಿಸುವ ಉದ್ದೇಶವಿದೆಯೇ ಎಂಬುದರ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕು.
ಅನಂತ್ ಮೂರ್ತಿಯವರು ಭಟ್ಕಳವನ್ನು ಬಾಂಗ್ಲಾಕ್ಕೆ ಹೋಲಿಸಿ ಅಂತಾರಾಷ್ಟ್ರೀಯ ವಿಷಯವನ್ನು ಪ್ರಸಾತಾಪಿಸಿದ್ದಾರೆ, ಹಾಗೆಯೇ ಬಾಂಗ್ಲಾ ಹಿಂದೂಗಳ ರಕ್ಷಣೆಗೆ ನಿಮ್ಮ ಸ್ವಯಂ ಘೋಷಿತ ಹಿಂದೂ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು ಎನ್ನುವುದನ್ನು ಸಹ ತಿಳಿಸಬೇಕು ಎಂದು ಪ್ರಸನ್ನ ನಾಯ್ಕ್ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ/ಭಟ್ಕಳವನ್ನು ಬಾಂಗ್ಲಾ ಮಾಡಲು ಹೊರಟಿದೆಯೇ ಕಾಂಗ್ರೆಸ್ ..? ಅನಂತಮೂರ್ತಿ ಹೆಗಡೆ


