ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: ಬಿಜೆಪಿ ರಾಜ್ಯಕ್ಕೆ ಅಂಟಿರುವ ಕಳಂಕ, ಭ್ರಷ್ಟಾಚಾರ ದ ಮಾತಾಡೋ ನೀವು ಮೋದಿಯವರ ನಮಾಮಿ ಗಂಗೆಯಲ್ಲಿ ಮುಳುಗಿದರು ನಿಮ್ಮ ಭ್ರಷ್ಟಾಚಾರದ ಪಾಪ ಪರಿಹಾರ ಆಗುವುದಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಪ್ರಸನ್ನ ಕುಮಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ..
ಅಧಿಕಾರದಲ್ಲಿದ್ದ ಸಂಧರ್ಭದಲ್ಲಿ ಲೂಟಿ ಹೊಡೆಯುವುದೇ ಕಾಯಕ ಮಾಡಿಕೊಂಡಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಸ್ಪದ. ತಂದೆಯ ಹೆಸರಿನಲ್ಲಿ ಲಂಚ ತಗೆದುಕೊಂಡು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಯೆಡಿಯೂರಪ್ಪನವರನ್ನ ಜೈಲಿಗೆ ಕಳುಹಿಸಿದ್ದ ವಿಜಯೇಂದ್ರ ಅವರೇ ಇಂದು ಬಿಜೆಪಿ ರಾಜ್ಯ ಅಧ್ಯಕ್ಷರು, ಹೀಗಿರುವಾಗ ಬಿಜೆಪಿ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಅವರಿಗೆ ಪಾಪ ಸುತ್ತಿಕೊಳ್ಳುತ್ತದೆ.
ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿ ಸಮಾಜದಲ್ಲಿ ವಿಭಜನೆ ಸೃಷ್ಟಿಸಿರುವುದೇ ಅವರ ಸಾಧನೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ಹಗರಣಗಳಲ್ಲೆ ಸರ್ಕಾರ ನಡೆದಿದ್ದು, ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾಜಿ ಸಚಿವ ಆರ್.ವಿ. ದೇಶಪಾಂಡೆ ಅವರ ಕೊಡುಗೆ ಜಿಲ್ಲೆಯಾದ್ಯಂತ ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದೇಶಪಾಂಡೆ ಅವರ ಪಾತ್ರ ಮಹತ್ವದ್ದಾಗಿದೆ.
ನಿಮ್ಮ ಸರ್ಕಾರ ಘೋಷಣೆ ಮಾಡಿದ ಉಡಾನ್ ಯೋಜನೆ ಹಾಗೂ ಹಿಂದಿನ ಸಂಸದರು ಘೋಷಣೆ ಮಾಡಿದ್ದ ಯಾಣ ರೋಪ್ವೇ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷರು ಸ್ಪಷ್ಟನೆ ನೀಡಬೇಕು. ಕುಮಟ–ಶಿರಸಿ ಹೆದ್ದಾರಿ, ಶಿರಸಿ–ಹಾವೇರಿ ರಸ್ತೆ ಹಾಗೂ ಮಂಗಳೂರು–ಕಾರವಾರ ಅವೈಜ್ಞಾನಿಕ ಹೆದ್ದಾರಿಗಳು ಸಂಸದರ ಕಾರ್ಯಕ್ಷಮತೆಯ ಕೊರತೆಯನ್ನು ತೋರಿಸುತ್ತವೆ ತಮ್ಮ ಹೇಳಿಕೆ ಮೂಲಕ ಟೀಕಿಸಿದ್ದಾರೆ.
ಆರ್.ವಿ. ದೇಶಪಾಂಡೆ ಅವರ ಕೊಡುಗೆಗಳ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ಧ. ಬಿಜೆಪಿ ಜಿಲ್ಲಾ ಅಧ್ಯಕ್ಷರು ಸಮಯ ಹಾಗೂ ಸ್ಥಳ ನಿಗದಿ ಮಾಡಲಿ. ತಮ್ಮ ಸಂಸದರ ಅಭಿವೃದ್ಧಿ ಪಟ್ಟಿಯನ್ನೂ ತಂದು ಚರ್ಚೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಬಿಜೆಪಿ ನೂರು ಪತ್ರಿಕಾಗೋಷ್ಠಿ ನಡೆಸಿ ಸಾವಿರ ಸುಳ್ಳು ಹೇಳಿದರೂ ಜಿಲ್ಲೆಯ ಹಾಗೂ ರಾಜ್ಯದ ಜನತೆ ಕ್ಷಮಿಸಲಾರರು.ಬಡವರ ಬದುಕು ಹಸನಾಗಿಸುವ ಕೆಲಸಕ್ಕೆ ಬಿಜೆಪಿ ಯಾವಾಗಲೂ ವಿರೋಧಿಯೇ, ಬಿಜೆಪಿಯ ಆಂತರಿಕ ಸಂವಿಧಾನವೇ ಬಡವರ,ಹಿಂದುಳಿದವರ, ದಲಿತರ ವಿರೋಧಿ ನೀತಿ, ಬಡವರು ಬಡವರಾಗೆ ಉಳಿಯಬೇಕು, ಅನಕ್ಷರಸ್ತರಾಗಿ ಉಳಿಯಬೇಕು, ಆಗ ಮಾತ್ರ ಬಿಜೆಪಿಗೆ ಸಮಾಧಾನ ಹಾಗೂ ಓಟ್ ಬ್ಯಾಂಕ್ ಭದ್ರ ಎಂಬ ಆಶಾಭಾವನೆ ಬಿಜೆಪಿಯವರದ್ದು.ಆದ್ದರಿಂದಲೇ ಬಿಜೆಪಿಯು ಪ್ರತಿ ಭಾರಿಯು ಬಡವರ,ರೈತರ, ಮಹಿಳೆಯರ ವಿರೋಧಿನೀತಿಯನ್ನು ಅನುಸರಿಸುವುದು.
ನೀವು ಕರ್ನಾಟಕದಲ್ಲಿ ಹಿಂಬಾಗಿಲಿನಿಂದ ಅಧಿಕಾರಕ್ಕೇರಿದ ಸಂಧರ್ಭದಲ್ಲಿ ಕೇವಲ ಭ್ರಷ್ಟಾಚಾರ, ಹಗರಣ, ಧರ್ಮದ ಆಧಾರದಲ್ಲಿ ವಿಭಜನೆ, ಕೋಮುಗಲಭೆ, ಆರಾಜಕತೆಯನ್ನು ಸೃಷ್ಟಿಸಿ ಜನಗಳ ನೆಮ್ಮದಿಯ ಬದುಕಿಗೆ ಕೊಳ್ಳಿ ಇಟ್ಟ ನೀವು ಜನಗಳ ಕ್ಷಮೆ ಕೇಳಬೇಕು,ಕರ್ನಾಟಕದ ಜನತೆಗೆ ನೀವು ನೀಡಿದ್ದ ನೋವನ್ನು ನೀವಾರಿಸುವ ಕೆಲಸವನ್ನು ಇಂದು ನಮ್ಮ ಸರ್ಕಾರ ಮಾಡುತ್ತಿದೆ.
ಬಿಜೆಪಿ ಈ ರಾಜ್ಯಕ್ಕೆ ಅಂಟಿದ ಕಳಂಕವಾಗಿದೆ, ಬಿಜೆಪಿಯ ನಾಯಕ ಸುನಿಲ್ ಹೆಗಡೆ ಅವರು ಹಿರಿಯ ಮುತ್ಸದ್ದಿ ನಾಯಕರಾದ ಆರ್ ವಿ ದೇಶಪಾಂಡೆಯವರ ಕುರಿತು ಶನಿ ಎಂಬ ಪದ ಪ್ರಯೋಗ ಮಾಡಿ ನಾಲಿಗೆ ಹರಿಬಿಟ್ಟಿದ್ದು ಕಂಡನೀಯ, ಕೇವಲ ಒಂದು ಬಾರಿ ಲಾಟರಿ MLA ಆದ ಸುನಿಲ್ ಹೆಗಡೆ ಅವರು 9 ಬಾರಿ ಶಾಸಕರು, ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡಿದ ದೇಶಪಾಂಡೆ ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ, ದೇಶಪಾಂಡೆ ಅವರ ಭ್ರಷ್ಟಾಚಾರದ ದಾಖಲೆಗಳು ಇದ್ದರೆ ಬಹಿರಂಗ ಪಡಿಸಿ, ಪತ್ರಿಕೆಯ ಮುಂದೆ ಪೌರುಷ ಬೇಡ ಎಂದಿದ್ದಾರೆ.
ಎಂದು ಮಾಧ್ಯಮಗಳಿಗೆ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಪ್ರಸನ್ನ ಕುಮಾರ ತಿಳಿಸಿದ್ದಾರೆ….
ಚುನಾವಣೆಯಲ್ಲಿ ಪರಾಭವಗೊಂಡರೂ ಕ್ಷೇತ್ರದ ಅಭಿವೃದ್ಧಿ ಮರೆಯದ ನಿವೇದಿತಾ ಆಳ್ವ


