ಸುದ್ದಿಬಿಂದು ಬ್ಯೂರೋ ವರದಿ
ಭಟ್ಕಳ: ಹಳೆ ಬಸ್ ನಿಲ್ದಾಣ ಸಮೀಪ ಅನಾರೋಗ್ಯದಿಂದ ಮೃತಪಟ್ಟಿದ್ದ ಭಿಕ್ಷುಕನ ಅಂತ್ಯಸಂಸ್ಕಾರವನ್ನು ರುದ್ರ ಭೂಮಿಯಲ್ಲಿ ಪೊಲೀಸರು ಹಾಗೂ ಸಮಾಜ ಸೇವಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಆಗಸ್ಟ್ 30ರಂದು ಅಂಗಡಿ ಮುಂಭಾಗ ಕುಳಿತ ಸ್ಥಿತಿಯಲ್ಲಿಯೇ ಭಿಕ್ಷುಕನು ಸಾವಿಗೀಡಾಗಿದ್ದ. ನಂತರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶವಗಾರದಲ್ಲಿ 8ದಿನ ಇಡಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಆತ ಬಸ್ ನಿಲ್ದಾಣದ ಮೀನು ಮಾರುಕಟ್ಟೆ ಪಕ್ಕದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಮೃತನ ವಾರಸುದಾರರನ್ನು ಪತ್ತೆ ಹಚ್ಚಲು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರೂ ಸೆಪ್ಟೆಂಬರ್ 6ರವರೆಗೆ ಯಾರೂ ಮುಂದೆ ಬರದೇ ಇರುವುದರಿಂದ, ಮರಣೋತ್ತರ ಪರೀಕ್ಷೆಯ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಯಿತು.ಅಂತ್ಯಸಂಸ್ಕಾರದಲ್ಲಿ ಸಮಾಜ ಸೇವಕರು ಮಂಜು ಮುಟ್ಟಳ್ಳಿ, ಇಸ್ಮಾಯಿ ಸವುದ್ ಗವಾಯಿ, ನಗರ ಪೋಲಿಸ್ ಠಾಣೆ ಎ.ಎಸ್.ಐ ಅಂತೋನಿ ಫರ್ನಾಂಡಿಸ್, ಪೊಲೀಸ್ ಸಿಬ್ಬಂದಿ ಮಹೇಶ್ ಪಟಗಾರ್, ಆಂಬುಲೆನ್ಸ್ ಚಾಲಕ ಏವರೆಟ್ಸ್, ಪುರಸಭೆ ಪೌರ ಕಾರ್ಮಿಕರು ಹಾಜರಿದ್ದರು.
ಇದನ್ನೂ ಓದಿ : ಕಾರವಾರ ಕ್ರಿಮ್ಸ್ ನಿವೃತ್ತ ನಿರ್ದೇಶಕ ಗಜಾನನ ನಾಯಕನ ವಿರುದ್ಧ ಕ್ರಮಕ್ಕೆ ಸೂಚನೆ