ಸುದ್ದಿಬಿಂದು ಬ್ಯೂರೋ‌ ವರದಿ
ಭಟ್ಕಳ : ತಾಲೂಕಿ‌ನ ಶಿರಾಲಿಯ ಗುಮನಹಕ್ಲುವಿನಲ್ಲಿ ಮನೆಯೊಂದರ ಬೀಗ ಮುರಿದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಜುನಾಥ ಮಾಸ್ತಪ್ಪ ನಾಯ್ಕ ಎಂಬುವರಿಗೆ ಸೇರಿದ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ  ಹಾಗೂ ನಗದು ಕಳ್ಳತನವಾಗಿದೆಚಿನ್ನ. ಮಾಸ್ತಪ್ಪ ಪತ್ನಿ ಕಳೆದ ಕೆಲ ದಿನಗಳ ಹಿಂದೆ ಬಾಣಂತನಕ್ಕಾಗಿ ಮುರ್ಡೇಶ್ವರದಲ್ಲಿರುವ ತಾಯಿ ಮನೆಗೆ ಹೋಗಿದ್ದರು. ಇನ್ನೂ ಮಂಜುನಾಥ ನಾಯ್ಕ ಸಹ ಮನೆಯಲ್ಲಿ ಇಲ್ಲದ ಸಮಯವನ್ನ ನೋಡಿದ ಕಳ್ಳರು ಮನೆಯ ಮುದಿನ ಬಾಗಿಲ ಬೀಗ ಮುರಿದು ಒಳ್ಳನುಗ್ಗಿದ್ದು, ಕಪಾಟಿನಲ್ಲಿದ್ದ ಸುಮಾರು 20ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಈಗಾಗಲೇ ಘಟನಾ ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಖಾಸಗಿ ಬಸ್-ಲಾರಿ ನಡುವೆ ಅಪಘಾತ