ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ : ತಾಲೂಕಿನ ಬರ್ಗಿ ಹಾಗೂ ಹಿರೇಗುತ್ತಿ ಭಾಗದಲ್ಲಿ ಸ್ವಲ್ಪ ಮೋಡಕವಿದ್ದರೆ ಸಾಕು ತಕ್ಷಣ ವಿದ್ಯುತ್ ಕಟ್ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು, ಇದೆ ರೀತಿ ಮುಂದುವರೆದಲ್ಲಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದಾರೆ.
ಅದು ಎಷ್ಟೆ ಗಾಳಿ ಮಳೆ ಆದರೂ ಪಕ್ಕದ ಊರುಗಳಲ್ಲಿ ಸದಾ ವಿದ್ಯುತ್ ಇರುತ್ತದೆ.ಆದರೆ ಬರ್ಗಿ ಮತ್ತು ಹಿರೇಗುತ್ತಿ ಭಾಗದಲ್ಲಿ ಸಣ್ಣಮೋಡ ಆದರೂ ಕೂಡ ತಕ್ಷಣ ವಿದ್ಯುತ್ ಕಟ್ಟಮಾಡುತ್ತಿದ್ದಾರೆ. ಈಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನ ಕೇಳಿದರೆ ಒಂದಲ್ಲ ಒಂದು ಕಾರಣ ನೀಡಿ ಜಾರಿಕೊಳ್ಳತ್ತಾರೆ. ಪಕ್ಕದಲ್ಲಿ ಊರಲ್ಲಿ ಕರೆಂಟ್ ಇದೆ ಅಂತಾ ಕೇಳಿದ್ದರೆ ಅದು ಬೇರೆ ಕಡೆಯಿಂದ ಬಂದಿರೋದು ಅದಕ್ಕೆ ಅಲ್ಲಿ ಕರೆಂಟಿದೆ ಅಂತಾರೆ. ಗೋಕರ್ಣದಿಂದ ಬರ್ಗಿ ತನಕ ಗೋಕರ್ಣ,ಗ್ರೀಡ್ ನಿಂದಲ್ಲೆ ಕರೆಂಟ್ ಬರೋದು, ಹೀಗಿರುವಾಗ ಮಾದನಗೇರಿ, ತೋರ್ಕೆ,ಸಾಣಿಕಟ್ಟಾ ಈ ಭಾಗದಲ್ಲೆಲ್ಲಾ ಕರೆಂಟ್ ಇದ್ದರೆ ಅದೆ ಲೈನ್ ನಿಂದ ಬಂದ್ ಬರ್ಗಿ ಮತ್ತೆ ಹಿರೇಗುತ್ತಿಯಲ್ಲಿ ಯಾವತ್ತು ಕರೆಂಟ್ ಇರಲ್ಲ.
ಬೆಳಿಗ್ಗೆ ಸಮಯಲ್ಲಿ ಕರೆಂಟ್ ಹೋದರೆ ದಿನ ಪೂರ್ತಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲೆ ಕಾಲ ಕಳೆಯಬೇಕಾದ ಪರಿಸ್ಥಿತಿ ಇದೆ. ಇನ್ನೂ ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿದರೆ ತಮ್ಮ ಸರಕಾರಿ ನಂಬರ್ನ್ನೆ ಸ್ವೀಚ್ ಆಪ್ ಮಾಡಿಕೊಂಡು ಬಿಡತ್ತಾರೆ. ಇದು ಕೇವಲ ಮಳೆಗಾಲದಲ್ಲಿ ಮಾತ್ರ ಉಂಟಾಗುತ್ತಿರುವ. ಸಮಸ್ಯೆ ಅಲ್ಲ ವರ್ಷದ ಎಲ್ಲಾ ದಿನದಲ್ಲೂ ಇದೇ ಸಮಸ್ಯೆ, ಸಮಯಕ್ಕೆ ಸರಿಯಾಗಿ ವಿದ್ಯುತ್ ಬಿಲ್ ಕೇಳೋಕ್ಕೆ ಬರುವ ಇವರು ನಮ್ಮಗೆ ಯಾಕೆ ಸರಿಯಾಗಿ ಕರೆಂಟ್ ಕೊಡತ್ತಾ ಇಲ್ಲ. ಈ ಭಾರೀ ಬಿಲ್ ಕೇಳೊದಕ್ಕೆ ಬಂದರೆ ವಾಪಸ್ ಕಳಸ್ತೆವೆ ಎಂದು ಸ್ಥಳೀಯರು ಹೇಳತ್ತಿದ್ದಾರೆ.
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


