ಸುದ್ದಿಬಿಂದು ಬ್ಯೂರೋ ವರದಿ
Karwar: ಕಾರವಾರ : ಕಾಡು ಪ್ರಾಣಿ ಹಾವಳಿ ತಡೆಯಲು ಹಾಕಲಾದ ವಿದ್ಯುತ್ ತಂತಿ ತಗಲಿ ಏಳು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿ ಕಿನ್ನರ ಸಮೀಪದ ಮಸೀದಿ ಬಳಿ ನಡೆದಿದೆ.

ಸುರೇಖಾ ಫಡ್ನೇಕರ್ ಎಂಬುವವರಿಗೆ ಸೇರಿದ್ದ ಎರಡು ಕೋಣ ಹಾಗೂ ಐದು ಎಮ್ಮೆ ಸಾವನ್ನಪ್ಪಿದೆ. ಸುರೇಖಾ ಫಡ್ನೇಕರ್ ಅವರು ಮಂಗಳವಾರ ತಮ್ಮಗೆ ಸೇರಿದ ಜಾನುವಾರುಗಳನ್ನ ಮೇಯುವುದಕ್ಕಾಗಿ ಗದ್ದೆಗೆ ಬಿಟ್ಟಿದ್ದರು ಎನ್ನಲಾಗಿದೆ.ಈ ಜಾನುವಾರುಗಳು ಗದ್ದೆಯಲ್ಲಿ ಮೇಯುತ್ತಿದ್ದ ವೇಳೆ ಅಲ್ಲೆ ಇದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎಲ್ಲಾ ಏಳು ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದೆ..ಈ ಬಗ್ಗೆ ಸುರೇಖಾ ಅವರು ದೂರು ದಾಖಲಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ