ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಮೀನುಗಾರಿಕಾ ಬೋಟ್ ನಲ್ಲಿ ಕಾರ್ಮಿಕ ನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗಂಗೆ ಕೊಳ್ಳದಲ್ಲಿ ನಡೆದಿದೆ.

ಒರಿಸ್ಸಾದ ಸಂಬಲಪುರದ ನಿವಾಸಿ ನಿರಂಜನ್ ಎಂಬಾತನೆ ಸಾವನ್ನಪ್ಪಿರುವ ಕಾರ್ಮಿಕನಾಗಿದ್ದಾನೆ. ಈತ ಒರಿಸ್ಸಾದಿಂದ ಮೀನುಗಾರಿಕೆಗಾಗಿ ಒರಿಸ್ಸಾದಿಂದ ಗೋಕರ್ಣಕ್ಕೆ ಬಂದಿದ್ದು, ಬೋಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು ಈ ವೇಳೆ ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಗೋಕರ್ಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತ ಶವವನ್ನು ಗೋಕರ್ಣ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ..

ಇದನ್ನೂ ಓದಿ