ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಗುಜರಿ ಶೇಖರಣ ಘಟಕವೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಹಾನಿ ಉಂಟಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಂಜಳ್ಳಿ ಕ್ರಾಸ್ ಬಳಿ ನಡೆದಿದೆ.
ಫಾವಿದ್ ಶೇಖ್ ಇವರಿಗೆ ಸೇರಿದ ಗುಜರಿ ಶೇಖರಣ ಘಟಕ ಇದಾಗಿದ್ದು, ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಭಾರೀ ಬೆಂಕಿಯಿಂದಾಗಿ ಘಟಕದಲ್ಲಿದ್ದ ಸಿಲೆಂಡರ್ ಸ್ಪೋಟಗೊಂಡು ಬುಲೆರೊ ಪಿಕಪ್ ವಾಹನ,ಪ್ರೆಸ್ಸಿಂಗ್ ಮಷಿನ್ ಸೇರಿದಂತೆ ಅನೇಕ ವಸ್ತುಗಳು ಬೆಂಕಿಯಿಂದಾಗಿ ಹಾನಿಗೊಳಗಾಗಿದೆ.
ಬೆಂಕಿ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಬೆಂಕಿ ನಂದಿದ್ದಾರೆ.
ಇದನ್ನೂ ಓದಿ