ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ : ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣ ಮತ್ತು ಭಯೋತ್ಪಾದಕ ಚಟುವಟಿಕೆಯ ಆರೋಪ ಎದುರಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪುನಗರದ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಸ್ ಶುಕೂರ್ ಅವರನ್ನು ವಿಜಯಪುರದ ಸಿಂದಗಿಯಲ್ಲಿ ಬಂಧಿಸಿಸಲಾಗಿದೆ..
ಭಯೋತ್ಪಾದಕ ಚಟುವಟಿಕೆಗಳ ಸಂಬಂಧ ಸಿರಸಿಯಲ್ಲಿ ಎನ್ಐಎ ಬಂಧಿಸಿದ್ದ ಸಾದಿಕ್ಗೆ ತರಬೇತಿ ಅನ್ನು ಇದೆ ಮೌಸೀನ್ ನೀಡಿದ್ದ ಎನ್ನಲಾಗಿದೆ ಬೆಂಗಳೂರಿನ ಕೆಜಿ ಹಳ್ಳಿ-ಡಿಜೆ ಹಳ್ಳಿ ಪ್ರಕರಣದಲ್ಲೂ ಈತ ಆರೋಪಿಯಾಗಿದ್ದು. ಇದಕ್ಕೆ ಸಂಬಂಧಿಸಿ, ಶಿರಸಿ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಿಸಲಾಗಿತ್ತು.
ಘಟನೆ ಬಳಿಕ ಹೈದ್ರಾಬಾದ್ ತೆರಳಿದ್ದ ಅಲ್ಲಿಯೂ ತಪ್ಪಿಸಿಕೊಂಡು ವಿಜಯಪುರದ ಸಿಂದಗಿಯಲ್ಲಿ ನೆಲೆಸಿದ್ದ ಎನ್ನುವ ಬಗ್ಗೆ ನಿಖರವಾದ ಮಾಹಿತಿ ಪಡೆದ ಪೊಲೀಸರು ಉತ್ತರಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಸಿಂದಗಿಯಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ