ಸುದ್ದಿಬಿಂದು ಬ್ಯೂರೋ ವರದಿ
ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆ ಗುಡ್ಡಗಾಡುಗಳಿಂದ ಕೂಡಿರುವ ಜಿಲ್ಲೆ. ಒಂದೊಂದು ಗುಡ್ಡದಾಟಿದರೆ ಒಂದೋಂದು ತಾಲೂಕು, ಊರು, ಕೇರಿ ಹೀಗೆ ವಿಸ್ತಾರವಾದ ಪ್ರದೇಶವಿದೆ, ಕಡಿಮೆ ಜನಸಂಖ್ಯೆ ಇದೆ. ಆದ್ದರಿಂದ ತಾಲೂಕು ಕಚೇರಿ, ಜಿಲ್ಲಾಕೇಂದ್ರಕ್ಕೆ ತೆರಳಬೇಕೆಂದರೆ ಗ್ರಾಮೀಣ ಪ್ರದೇಶದ ಜನರಿಗೆ ಇದು ಸುಲಭವಲ್ಲ. ಜಿಲ್ಲೆಯಲ್ಲಿ ಹಲವರ ರೇಷನ್ ಕಾಡ ರದ್ದಾಗಿದ್ದಿದೆ, ಹಲವರಿಗೆ ಇನ್ನೂ ಆಧಾರ್ ಕಾರ್ಡ ಮಾಡಿಸಿಕೊಳ್ಳಲಾಗಿಲ್ಲ. ಗ್ರಾಮೀಣ ಭಾಗದವರು ಹಲವರು ಆಧಾರ್ ಗಾಗಿ ಅಲೆದು ಅಲೆದು ಸುಸ್ತಾಗಿದ್ದಂತೂ ನಿಜ.
ಅಂತೆಯೇ 80 ವರ್ಷದ ಅಜ್ಜಿ ಆದಾರ್ ಕಾರ್ಡ್ ಆಗಿಲ್ಲವಾದ್ದರಿಂದ ಅದನ್ನು ಮಾಡಿಸಿಕೊಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೊಂದು ಪತ್ರ ಬರೆದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ನಾನು ಆಧಾರ್ ಕಾರ್ಡ ಮಾಡಿಸುವ ಸಲುವಾಗಿ ನಾಡ ಕಚೇರಿ ಹಾಗೂ ಪೋಸ್ಟ್ ಆಪೀಸ್ ಗಳಿಗೆ ಅಲೆದಿದ್ದೇನೆ. ಆದರೆ ಜನ್ಮ ದಾಖಲೆಯ ಸಲುವಾಗಿ ಶಾಲಾ ಟಿಸಿ ಯನ್ನು ತೆಗೆದುಕೊಂಡು ಬನ್ನಿ ಎಂದಿದ್ದರು.
ಆದರೆ ನನ್ನ ಹತ್ತಿರ ಚುನಾವಣಾ ಚೀಟೆ ಹಾಗೂ ನಾನು ಕಲಿತ ಕನ್ನಡ ಶಾಲೆಯ ಮುಖ್ಯಾಧ್ಯಾಪಕರು ನೀಡಿದ ಜನ್ಮ ದಾಖಲೆ ಮಾತ್ರ ಇದೆ. ಸದ್ಯ ನನ್ನ ಎಪಿ ಎಲ್ ರೇಷನ್ ಕಾರ್ಡ ಕೂಡಾ ರದ್ದಾಗಿದೆ. ನಾನು ವಯೋವೃದ್ಧೆ ಯಾಗಿದ್ದು, ಮರಣದ ನಂತರ ಮರಣ ಪ್ರಮಾಣ ಪತ್ರ ಮಾಡಿಸಲಾದರೂ ಮಗನಿಗೆ ಅನುಕೂಲವಾಗಲೆಂದು ಭಾರತೀಯ ಪ್ರಜೆಯಾದ ನನಗೆ ಆಧಾರ್ ಕಾರ್ಡ ಮಾಡಿಸಿಕೊಡಲು ವಿನಂತಿಸಿ ಕೊಳ್ಳುತ್ತೇನೆ. ನಮ್ಮ ಜಿಲ್ಲೆಯಲ್ಲಿ ನನ್ನಂತೆ ಆಧಾರ್ ಕಾರ್ಡ ಆಗದೇ ಇರುವವರು ಹಲವಾರು ಜನರಿದ್ದಾರೆ. ಅವರಿಗೂ ಈ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅವರು ತಾವು ಬರೆದಿರುವ ಪತ್ರದಲ್ಲಿ ಉಲ್ಲಾಖೆಸಿದ್ದಾರೆ.
ಅಲ್ಲದೆ ಉತ್ತರ ಕನ್ನಡ ಜಿಲ್ಲಾಧಿಕಾರಿಗೂ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.
ಇವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಾನಕೊಡ್ಲು ಎಂಬ ಗ್ರಾಮದವರಾಗಿದ್ದು ಬಸ್ ಸೌಲಭ್ಯಕ್ಕಾ ಸುಮಾರು 10ಕಿಮಿ ದೂರ ಕಾಡುದಾರಿಯಲ್ಲಿ ಬರಬೇಕಿದೆ.
ಮಯೋವೃದ್ಧರಿಗಾಗಿಯೇ ಮನೆಯಿಂದಲೇ ಮತದಾನ ಮಾಡುವ ಅವಕಾಶ ನೀಡಲಾಗಿದೆ. ಅಂತೆಯೇ ಇಂಥ ವಯೋವೃದ್ಧರಿರುವ ಮನೆಗೆ ಅಧಿಕಾರಿಗಳೇ ತೆರಳಿ, ಯಾರೆಲ್ಲರಿಗೆ ಆಧಾರ್ ಮಾಡಿಸುವ ತೊಂದರೆ ಇದೆ, ಕುಗ್ರಾಮವಿದೆ ಎಂದೆಲ್ಲ ನೋಡಿ, ಆಧಾರ್ ಮಾಡಿಸಿಕೊಡಬೇಕಿದೆ. ಇಲ್ಲವಾದಲ್ಲಿ ಇಪ್ಪತ್ತು, ಮೂವತ್ತು, ನಲವತ್ತಕ್ಕೂ ಹೆಚ್ಚು ಕಿಲೋಮೀಟರ್ ದೂರದವರೆಗೆ ವೃದ್ಧರು ಬಂದು ಆಧಾರ್ ಮಾಡಿಸುವುದು ಕನಸಿನ ಮಾತೇ ಸರಿ. ಆಧಾರ್ ಆಗುವ ಮೊದಲೇ ಇಹಲೋಕ ತ್ಯಜಿಸುವಷ್ಟು ವಯಸ್ಸಾದವರು ಇನ್ನೂ ಹಲವರಿದ್ದಾರೆ. ಅಧಿಕಾರಿಗಳು ಈ ಬಗ್ಗೆ ಎಚ್ಚರವಹಿಸಬೇಕಿದೆ ಎನ್ನುವುದು ಪ್ರಾಜ್ಞಾವಂತರ ಅಭಿಪ್ರಾಯ.
ಸತ್ತಮೇಲಾದರೂ ಮಕ್ಕಳಿಗೆ ಅನುಕೂಲವಾಗಲಿ
ನನಗೆ ಆಧಾರ್ ಕಾರ್ಡ್ ಆಗಬೇಕಿದ್ದರಿಂದ ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಬ್ಯಾಂಕ್, ಅಧಾರ್ ಕೇಂದ್ರ ತಹಸೀಲ್ದಾರ್ ಕಚೇರಿ, ಪೋಸ್ಟ್ ಆಪೀಸ್ ಎಲ್ಲವನ್ನೂ ಕಳೆದ ಹತ್ತು ವರ್ಷಗಳಿಂದ ಅಲೆದು ಸಾಕಾಗಿದೆ. ಇನ್ನೂ ಆಧಾರ್ ಮಾಡಿಸಲಾಗದೇ ಸತ್ತ ಮೇಲಾದರೂ ಮಕ್ಕಳಿಗೆ ಅನುಕೂಲವಾಗಲೆಂದು ಆಧಾರ್ ಗಾಗಿ ಮೋದಿಗೆ ಪತ್ರ ಬರೆದಿದ್ದೇನೆ.
ಸರಸ್ವತಿ ರಾಮಾ ಹೆಗಡೆ.
ಇದನ್ನೂ ಓದಿ