Suddibindu Digital news ಬಳ್ಳಾರಿ : ಶಾಸಕರ ಕಚೇರಿಕೆ ಬಾಂಬ್ ಬೆದರಿಕೆ ಮೇಸೆಜ್ ಬಂದಿದ್ದು, ಆ ಮೆಜೇಸ್ ಶಾಸಕರ ಮೊಬೈಲ್ಗೂ ಕೂಡ ನೇರವಾಗಿ ರವಾನೆ ಆಗಿರುವ ಘಟನೆ ನಡೆದಿದೆ.
ನಗರದ ಮೋಕಾ ರಸ್ತೆಯಲ್ಲಿರುವ ಶಾಸಕ ಭರತ್ ರೆಡ್ಡಿ ಅವರ ಕಚೇರಿಕೆ ಈ ರೀತಿಯಾಗಿ ಬಾಂಬ್ ಬೆದರಿಕೆ ಮೆಸೇಜ್ ಬಂದಿದೆ ಎನ್ನಲಾಗಿದೆ. ರೂಪನಗುಡಿ ನಿವಾಸಿ ಆಗಿರುವ ಸಂತೋಷ್ ಎಂಬಾತ ಈ ರೀತಿಯಾಗಿ ಬಾಂಬ್ ಬೆದರಿಕೆ ಮೇಸೇಜ್ ಮಾಡಿರುವುದಾಗಿ ತಿಳಿದು ಬಂದಿದೆ.ತಡ ರಾತ್ರಿ ಶಾಸಕರ ಮೊಬೈಲ್ಗೆ ಸಂತೋಷ ಎಂಬಾತ ಬಾಂಬ್ ಬೆದರಿಕೆ ಮೆಸೇಜ್ ಕಳುಹಿಸಲಾಗಿದೆ.
ತಕ್ಷಣ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆಳಗಾಗುವುದರೊಳಗೆ ಆತನನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಆದರೆ ಸದ್ಯ ಈ ರೀತಿ ಬೆದರಿಕೆ ಒಡ್ಡಲು ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
ಇದನ್ನೂಓದಿ