ಸುದ್ದಿಬಿಂದು ಬ್ಯೂರೋ ವರದಿ
ಕುಮಟಾ:ಬಿಜೆಪಿಯ ಮಹಿಳಾ ಮೋರ್ಚಾದ ತಾಲೂಕು ಅಧ್ಯಕ್ಷೆ ಜಯಾ ಪ್ರಕಾಶ ಶೇಟ್ ವಿರುದ್ಧ ಕುಮಟಾದ ಜೆಎಂಎಫ್ಸಿ ಕೋರ್ಟ್ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿದೆ.
ಆರೋಪಿತೆ ಜಯಾ ಶೇಟ್ ಪಟ್ಟಣದ ಗಿಬ್ ಸರ್ಕಲ್ ಬಳಿಯ ಕಿಂಗ್ ಕ್ರೆಡಿಟ್ ಸೌಹಾರ್ದ ಕೋ ಆಫರೇಟಿವ್ ಲಿಮಿಟೆಡ್ ಸಂಸ್ಥೆಯಲ್ಲಿ ಸಾಲ ಪಡೆದಿದ್ದರು. ಸಾಲವನ್ನು ಮರು ಪಾವತಿ ಮಾಡದ ಕಾರಣ ಸಹಕಾರಿ ಸಂಸ್ಥೆಯಿಂದ ಇವರಿಗೆ ನೋಟಿಸ್ ಕೂಡ ನೀಡಿತ್ತು. ಆದರೆ ನೋಟಿಸ್ಗೂ ಉತ್ತರ ನೀಡದ ಕಾರಣ ಸಹಕಾರಿ ಸಂಸ್ಥೆಯು ಆಕೆಯು ಶೂರೀಟಿಗಾಗಿ ನೀಡಿದ್ದ ಚೆಕ್ನ್ನು ಬ್ಯಾಂಕ್ನಲ್ಲಿ ಹಾಜರು ಮಾಡಿದಾಗ ಚೆಕ್ ಬೌನ್ಸ್ ಆಗಿದೆ. ಹಣವಿಲ್ಲದ ಖಾತೆಯ ಚೆಕ್ ನೀಡಿ 1.90 ಲಕ್ಷ ರೂ. ವಂಚನೆ ಮಾಡಿರುವ ಸಂಬoಧ ಕಿಂಗ್ ಕ್ರೆಡಿಟ್ ಸೌಹಾರ್ದ ಕೋ ಆಫರೇಟಿವ್ ಲಿಮಿಟೆಡ್ ಸಂಸ್ಥೆಯು ಜೆಎಂಎಫ್ಸಿ ಕೋರ್ಟ್ನಲ್ಲಿ 2024ರ ಡಿಸೆಂಬರ್ 26ರಂದು ಪ್ರಕರಣ ದಾಖಲಿಸಿತ್ತು.
ಆರೋಪಿತೆಯು ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದಿದ್ದರೂ ಸಹಕಾರಿ ಸಂಸ್ಥೆಗೆ ಚೆಕ್ ನೀಡಿ, ಮೋಸ ಮಾಡಿದ್ದಾರೆ ಎಂದು ಸಹಕಾರಿ ಸಂಸ್ಥೆ ಆರೋಪಿಸಿತ್ತು. ಕಲಂ 223, 138 ಎನ್ಐ ಎಕ್ಟ್ ನಡಿ ಪ್ರಕರಣ ದಾಖಲಾಗಿತ್ತು. ಕೋರ್ಟ್ನಿಂದ ನೋಟಿಸ್ ಜಾರಿಯಾದರು ಆರೊಪಿತೆ ಕೋರ್ಟ್ ಹಾಜರಾಗಿಲ್ಲ. ಹಾಗಾಗಿ ಸೋಮವಾರ ಈ ಪ್ರಕರಣದ ಬಗ್ಗೆ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಜಯಾ ಶೇಟ್ಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.
ಶಾಸಕರ ಹೆಸರಿನಲ್ಲಿ ಬೆದರಿಕೆ
ಸಹಕಾರಿ ನೌಕರರು ಸಾಲ ವಸೂಲಿಗಾಗಿ ಕಾಲ್ ಮಾಡಿದರೆ, ಪದೇ ಪದೇ ಕಾಲ್ ಮಾಡಿದರೆ, ಶಾಸಕರಿಗೆ ಹೇಳಿತಿನಿ.ಹಾಗೆ ಮಾಡ್ತೀನಿ ಹೀಗೆ ಮಾಡ್ತಿನಿ ಎಂದು ಶಾಸಕರ ಹೆಸರು ಹೇಳಿ ಬೆದರಿಕೆ ಒಡ್ಡುತ್ತಿದ್ಧಳು ಎಂದೇ ಹೇಳಲಾಗುತ್ತಿದೆ.ಅಲ್ಲದೇ ಬಿಜೆಪಿಯಲ್ಲಿದ್ದ ಈಕೆ ಕೆಲ ರಾಜಕಾರಣಿಗಳ ಬಳಿಯೂ ಅರ್ಜೆಂಟ್ ಇದೆ ಎಂದು ಹೇಳಿಕೊಂಡು ಸಾವಿರಾರು ರೂ. ಹಣ ಪಡೆದು ಫಂಗನಾಮ ಹಾಕಿರುವ ಆರೋಪ ಕೂಡ ಕೇಳಿಬಂದಿದೆ. ಸ್ವಲಾಭಕ್ಕಾಗಿ ಶಾಸಕರ ಹೆಸರನ್ನು ಕೂಡ ಈಕೆ ಕೆಡಿಸುತ್ತಿದ್ದಾಳೆ ಎಂದು ಬಿಜೆಪಿ ಈಗ ಓಣಿ ಓಣಿಯಲ್ಲಿ ನಿಂತು ಆಡಿಕೊಳ್ಳುತ್ತಿದ್ದಾರೆ…
ಇದನ್ನೂ ಓದಿ
- “ರೈತರನ್ನು ಮದುವೆಯಾಗುವ ಮಹಿಳೆಯರಿಗೆ ಪ್ರೋತ್ಸಾಹ ಧನ ನೀಡುವಂತೆ ಸಿಎಂಗೆ ಪತ್ರ ಬರೆದ ಶಾಸಕ
- Bjp/ಬಿಜೆಪಿ ಉತ್ತರಕನ್ನಡ ಜಿಲ್ಲಾ ರೈತಮೋರ್ಚಾ ಅಧ್ಯಕ್ಷರಾಗಿ ಅನಂತಮೂರ್ತಿ ಹೆಗಡೆ ನೇಮಕ
- Accident News/ಭೀಕರ ರಸ್ತೆ ಅಪಘಾತ, ಸ್ಥಳದಲ್ಲೆ ಓರ್ವ ಸಾವು
- Bhatkal Crime News/ ಭಟ್ಕಳದಲ್ಲಿ ಕಾಡುಪ್ರಾಣಿ ಹತ್ಯೆ ಶಂಕೆ: 21 ಕೆಜಿ ಮಾಂಸ, ಜಿಂಕೆ ಕೊಬ್ಬು, ಎರಡು ಏರ್ಗನ್ ವಶಕ್ಕೆ


