ಸುದ್ದಿಬಿಂದು ಬ್ಯೂರೋ ವರದಿ
ಶಿರಸಿ: (Sirsi) ಮನೆ
ಹಂಚು ತೆಗೆದು ಒಳನುಗ್ಗಿದ್ದ ಕಳ್ಳರು ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ವಿಶ್ವೇಶ್ವರ ಬಡಾವಣೆಯಲ್ಲಿ ನಡೆದಿದೆ.

ನಾಗರಾಜ ವಾಸುದೇವ ನಿಲೇಕಣಿಯವರ ಮನೆಯಲ್ಲಿ ಕಳ್ಳತನವಾಗಿದ್ದು,ಮನೆಯ ಹಂಚು ತೆಗೆದು ಒಳ ನುಗ್ಗಿ 4.280 ಗ್ರಾಂ ತೂಕದ ಸುಮಾರು 96,850 ರೂ ಬೆಲೆಯ ವಜ್ರದ ಹರಳಿನ ಕಿವಿಯೊಲೆ ಹಾಗೂ ಸುಮಾರು 34150 ರೂ ಬೆಲೆಯ ಎರಡು ಉಂಗುರ ಕಳ್ಳತನವಾಗಿದೆ.

ಸುಮಾರು 1.31 ಲಕ್ಷ ರೂ ಬೆಲೆಯ ಚಿನ್ನಾಭರಣ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‌ಐ ರತ್ನಾ ಎಸ್ ಕುರಿ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದೆ.

ಗಮನಿಸಿ