ಸುದ್ದಿಬಿಂದು ಬ್ಯೂರೋ ವರದಿ(suddibindu Digital News)
ಬಾಗಲಕೋಟೆ :ನದಿಯಲ್ಲಿ ಈಜಲು ಹೋಗಿ ಮುಳುಗಿದ  ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಕಮತಗಿ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ನಡೆದಿದೆ.

ಮೃತ  ರಾಜು (12) ಮಡಿಕೇರಿ ಮತ್ತು (14) ವರ್ಷದ ಹುಚ್ಚೇಶ ಗೌಡರ ಎಂದು ಗುರುತಿಸಲಾಗಿದೆ. ನಿನ್ನೆ ಇವರಿಬ್ಬರು ತಮ್ಮ ಸೈಕಲ್ ತಗೆದುಕೊಂಡು ನದಿಯ ದಡದಲ್ಲಿ ಆಟವಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಲ್ಲಿ ಮುಳುಗಿದ್ದರು.  ಸಾಯಂಕಾಲವಾದರು ಮನೆಗೆ ಬಾರದ ಕಾರಣ ಪಾಲಕರುಹುಡುಕಾಟ ನಡೆಸಿದಾಗ ನದಿಯ ದಡದಲ್ಲಿ ಸೈಕಲ್ ಹಾಗೂ ಬಟ್ಟೆ ಇರುವುದು ಪತ್ತೆಯಾಗಿದೆ.ಇದನ್ನ ಗಮನಿಸಿದಾಗ ನೀರಲ್ಲೆ ಮುಳಗಿರಬಹುದು ಎಂದು ಸಂಶಯಪಟ್ಟು ಪೋಲಿಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೋಲಿಸರು ನದಿಯಲ್ಲಿ ಹುಡುಕಿದಾಗ ಶವ ಪತ್ತೆಯಾಗಿದೆ.

ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು,
ಅಮೀನಗಡ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..

ಗಮನಿಸಿ