ಸುದ್ದಿಬಿಂದು ಬ್ಯೂರೋ ವರದಿ
Karwar : ಕಾರವಾರ: ರಾತ್ರಿ ಸಮಯದಲ್ಲಿ ರಸ್ತೆ ಮದ್ಯ ಮಲಗುವ ಬಿಡಾಡಿ ದನಗಳಿಂದ ಸಂಭವಿಸುವ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನ ಸಂಚಾರಕ್ಕೆ ಅಡೆತಡೆಯಾಗುವ ಬೀಡಾಡಿ ದನಗಳನ್ನು ನಿಯಂತ್ರಿಸುವಲ್ಲಿ ಸಂಬಂಧಿಸಿದ ಸ್ಥಳೀಯಸಂಸ್ಥೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ.
ಆದರೆ ಈ ಬಿಡಾಡಿ ದನಗಳಿಂದಾಗುವ ಅಪಘಾತವನ್ನು ನಿಯಂತ್ರಿಸಲು ಅಬಕಾರಿ ಇಲಾಖೆಯ ಕಾರವಾರದ ಇನ್ಸ್ಪೆಕ್ಟರ್ ವಿಜಯ್ ಮಹಾಂತೇಶ ಮತ್ತು ಸಿಬ್ಬಂದಿ ರವಿಚಂದ್ರ ನಾಯ್ಕ ಅವರು ತಮ್ಮ ಸ್ವಂತ ಖರ್ಚಿನಿಂದ ರೇಡಿಯಮ್ ರಿಪ್ಲೆಕ್ಟರ್ ಬೆಲ್ಟ್ ಖರೀದಿ ಮಾಡಿ ಬಿಡಾಡಿ ದನಗಳ ಕುತ್ತಿಗೆಗೆ ಕಟ್ಟುತಿದ್ದಾರೆ.
ಈ ರೇಡಿಯಮ್ ರಿಪ್ಲೆಕ್ಟರ್ ನಿಂದ ವಾಹನಸಂಚಾರರಿಗೆ ರಸ್ತೆಯ ಮದ್ಯ ಮಲಗಿರುವ ಬಿಡಾಡಿ ದನಗಳು ಸ್ಪಷ್ಟವಾಗಿ ಗೋಚರಿಸಲಿದ್ದು, ಪರಿಣಾಮ ಅಪಘಾತಗಳ ಸಂಖ್ಯೆ ಕ್ಷೀಣಿಸಬಹುದು ಎಂಬ ಅಭಿಲಾಷೆ ಈ ಅಭಕಾರಿ ಸಿಬ್ಬಂದಿಗಳದ್ದಾಗಿದೆ.
ಗಮನಿಸಿ