suddibindu.in
ಹಳಿಯಾಳ : ಬಿಜೆಪಿಯ ಸದಸ್ಯತ್ವ ಅಭಿಯಾನದ ಕುರಿತು ಕರೆಯಲಾದ‌ ಸಭೆಯಲ್ಲಿ ಬಿಜೆಪಿಯ ಎರಡು ಬಣದ ನಡುವೆ ಮಾರಾಮಾರಿ ಉಂಟಾಗಿರುವ ಘಟನೆ ಪಟ್ಟಣದ ಗಣೇಶ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಬಿಜೆಪಿಯ ಸದಸ್ಯತ್ವ ಮಾಡುವ ಕುರಿತಾಗಿ ಬಿಜೆಪಿ ಜಿಲ್ಲಾಧ್ಯಕ್ಷರ‌ ಎನ್ ಎಸ್ ಹೆಗಡೆ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಕಳೆದ ವಿಧಾನಸಭಾ ಚುನಾವಣೆ ವೇಳೆ ಅಲ್ಲಿನ ಬಿಜೆಪಿಯಲ್ಲಿ ಎರಡು ಬಣ ಸೃಷ್ಟಿಯಾಗಿತ್ತು. ಈ ಎರಡು ಬಣಗಳ ನಡುವೆ ಕಳೆದ ಚುನಾವಣೆಯಿಂದಲ್ಲೂ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಅದು ಇಂದು ಬಹಿರಂಗವಾಗಿ ಬಡೆದಾಡಿಕೊಳ್ಳುವ ಮೂಲಕ ಸ್ಪೋಟವಾಗಿದೆ.

ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿ ಶಿವಾಮಿ ನರಸಾನಿ ಎಂಬುವವರು ಸಭೆ ಆಗಮಿಸಿದ್ದಾರೆ. ಈ ವೇಳೆ ಮಾಜಿ ಶಾಸಕ ಸುನೀಲ್ ಹೆಗಡೆ ಬಣದಲ್ಲಿ ಗುರುತಿಸಿಕೊಂಡ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಿ ನರಸಾನಿ ಅವರಿಗೆ ಸಭೆಗೆ ಯಾಕೆ ಬಂದಿದ್ದಾರೆ ಎಂದು ಸುನೀಲ್ ಹೆಗಡೆ ಬಣದವರ ಆಕ್ರೋಶದಿಂದ‌ ಕೂಗಾಡಿದ್ದಾರೆನ್ನಲಾಗಿದೆ.

ಅಷ್ಟಕ್ಕೆ ಸುಮ್ಮನಾಗದ ‌ಮಾಜಿ ಶಾಸಕ ಸುನೀಲ್‌ ಹೆಗಡೆ ಬಣದ‌ ಕಾರ್ಯಕರ್ತರು ‌ಕೂಗಾಟ, ಚಿರಾಟ ಮಾಡಿದ್ದಲ್ಲದೆ ಶಿವಾಜಿ ನರಸಾನಿಯನ್ನ ತುಂಬಿದ ಸಭೆಯಲ್ಲೆ ಎಳೆದಾಡಿ ಥಳಿಸಿದದ್ದಾರೆನ್ನಲಾಗಿದೆ.‌ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಇನ್ನೂ ಘಟನೆಗೆ ಸಂಬಂಧಿಸಿ ಹಲ್ಲೆಗೆ ಒಳಗಾದ ಶಿವಾಮಿ ನರಸಾನಿ ಅವರು ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೂ ಗಲಾಟೆ‌ ನಡೆಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕರು ಕಾಲ್ಕಿತ್ತಿದ್ದಾರೆನ್ನಲಾಗಿದೆ.

ಇದನ್ನೂ ಓದಿ