suddibindu.in
Karwar:ಕಾರವಾರ : ಅಂಕೋಲಾ ತಾಲೂಕಿನ ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರಿಗೆ ಪ್ರಧಾನಿಯವರ ವಿಪತ್ತು ನಿಧಿಯಿಂದ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ.
ಜುಲೈ 16ರಂದು ಉತ್ತರಕನ್ನಡ ಜಿಲ್ಲೆಯ ಶಿರೂರಿನಲ್ಲಿ ಭೂ ಕುಸಿತದಿಂದಾಗಿ ಕೇರಳದ ಅರ್ಜುನ್ ಸೇರಿ ಒಟ್ಟು 11ಜನ ಮೃತಪಟ್ಟಿದ್ದು.ಇದುವರಗೆ 8ಮಂದಿಯ ಶವ ಪತ್ತೆಯಾಗಿದ್ದು, ಇನ್ನೂ ಮೂವರ ಶವ ಪತ್ತೆಯಾಗಬೇಕಿದೆ. ಇನ್ನೂ ಈ ಬಗ್ಗೆ ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ಪ್ರಕರಣದಡಿ ಕೇಂದ್ರಸರ್ಕಾರದ ಪರಿಹಾರ ನಿಧಿಯಡಿ ಹಣ ಬಿಡುಗಡೆ ಮಾಡಬೇಕೆಂದು ಪ್ರಧಾನಿಯವರಿಗೆ ಪತ್ರ ಬರೆದಿದ್ದರು.
ಮೃತ ಕುಟುಂಬಕ್ಕೆ ಹೆಚ್ಚುವರಿ ಎರಡು ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಹಣ ಮಂಜೂರು ಮಾಡಿದ್ದು, ಸಂತ್ರಸ್ತರು ಸಂಬಂಧ ಪಟ್ಟ ಇಲಾಖೆಗೆ ಸರಿಯಾದ ದಾಖಲೆ ನೀಡಿದ್ದಲ್ಲಿ ನೇರವಾಗಿ ಸಂತ್ರಸ್ತರ ಖಾತೆಗೆ ಹಣ ಜಮ ಆಗಲಿದೆ.
ಇದನ್ನೂ ಓದಿ