www.suddibindu.in
Kumta : ಕುಮಟಾ : ಅಘನಾಶಿನಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ‌ ದೋಣಿ ಮುಗುಚಿ ನದಿಯಲ್ಲಿ ಮುಳುಗಡೆಯಾದ ಯುವಕ ಶವ ಇಂದು ಕೋಡ್ಕಣಿ ಸಮೀಪದ ಐಗಳಕುರ್ವೆ ಸಮೀಪ ಅಘನಾಶಿನಿ ನದಿಯಲ್ಲಿ ಪತ್ತೆಯಾಗಿದೆ.

ಮಣಿಕಂಠ ಮಂಜುನಾಥ ಅಂಬಿಗ (21) ಎಂಬಾತ ಶನಿವಾರ ತಂಡ್ರಕುಳಿ ಸಮೀಪ ದೋಣಿಯಲ್ಲಿ ಮೀನು ಹಿಡಿಯಲು ನದಿಗೆ ಹೋಗಿದ್ದ, ಈ ವೇಳೆ ಆತ ಇದ್ದ ದೋಣಿ ನದಿಯಲ್ಲಿ ಮುಗುಚಿ ಯುವಕ ನದಿಯಲ್ಲಿ ಮುಳುಗಡೆಯಾಗಿದ್ದ. ಬಳಿಕ ಆತನ ಪತ್ತೆಗಾಗಿ ಪೊಲೀಸರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು ಆತ ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಐಗಳಕುರ್ವೆಯ ಸೇತುವೆ ಸಮೀಪ ಅಘನಾಶಿನಿ ನದಿಯಲ್ಲಿ ಯುವಕ ಶವ ಪತ್ತೆಯಾಗಿದೆ. ನದಿಯಲ್ಲಿ ತೇಲಿ ಬಂದ ಯುವಕನ ಶವವನ್ನ ಮೇಲಕ್ಕೆತ್ತಲಾಗಿದೆ.ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ