suddibindu.in
ಅಂಕೋಲಾ : ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿತವಾಗಿ ಒಂದೇ ಕುಟುಂಬದ ಐವರು ಘಟನೆಯಲ್ಲಿ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ.ಕುಟುಂಬ ಎಲ್ಲರನ್ನ ಕಳೆದುಕೊಂಡ ಸಾಕು ನಾಯಿಯೊಂದು ತನ್ನವರಿಗಾಗಿ ಹುಡುಕಾಟ ನಡೆಸುತ್ತಿರುವ ದೃಶ್ಯ ಸುದ್ದಿಬಿಂದು ನ್ಯೂಸ್ಗೆ ಲಭ್ಯವಾಗಿದೆ.
ಹೌದು ಶಿರೂರು ಗುಡ್ಡಕುಸಿತ ಘಟನೆಯಲ್ಲಿ ಲಕ್ಷ್ಮಣ ನಾಯ್ಕ ಕುಟುಂಬ ದುರಂತ ಘಟನೆಗೆ ಸಿಲುಕಿ ಎಲ್ಲರೂ ಮೃತಪಟ್ಟಿದ್ದಾರೆ. ಲಕ್ಷ್ಮಣ ನಾಯ್ಕ ಕಳೆದ ಅನೇಕ ವರ್ಷಗಳಿಂದ ಶಿರೂರಿನಲ್ಲಿ ಹೊಟೇಲ್ ಒಂದನ್ನ ಇಟ್ಟುಕೊಂಡು ತನ್ನ ಪುಟ್ಟ ಸಂಸಾರ ನಡೆಸಿಕೊಂಡು ಬಂದಿದ್ದರು. ಅದರ ಜೊತೆ ಮನೆಯಲ್ಲಿಯಲ್ಲಿ ಎರಡು ನಾಯಿಯನ್ನ ಕೂಡ ಕುಟುಂಬದ ಸದಸ್ಯರಂತೆ ತುಂಬಾನೇ ಪ್ರೀತಿಯಿಂದ ಸಾಕಿ ಸಲುಹಿದ್ದರು.
ಇದನ್ನೂ ಓದಿ
- ಚಿತ್ತಾಕೂಲಕ್ಕೆ ನೂತನ ಪಿಎಸ್ಐ ಆಗಿ ಪರಶುರಾಮ್ ಮಿರ್ಜಿಗಿ, ಮುಂಡಗೋಡಕ್ಕೆ ಮಾಹಾಂತೇಶ್ ವಾಲ್ಮೀಕಿ ನೇಮಕ
- ದಸರಾ ಉದ್ಘಾಟನೆ ವಿವಾದಕ್ಕೆ ಫುಲ್ಸ್ಟಾಪ್ : ಬಾನು ಮುಷ್ತಾಕ್ ಆಯ್ಕೆಗೆ ಹೈಕೋರ್ಟ್ ಹಸಿರು ನಿಶಾನೆ
- ಕಾರವಾರ ನಗರದ ಹೃದಯಭಾಗದಲ್ಲೇ ಕೆಟ್ಟು ನಿಂತ ಬಸ್ : ಪ್ರಯಾಣಿಕರಿಗೆ ನಿತ್ಯವೂ ನರಕಯಾತನೆ
ಆದರೆ ಈ ದುರಂತದಲ್ಲಿ ಲಕ್ಷ್ಮಣ ನಾಯ್ಕ ಕುಟುಂಬಕ್ಕೆ ಕುಟುಂಬವೆ ಇಂದು ಘಟನೆಯಲ್ಲಿ ಸಾವನ್ನಪಿದೆ. ಆದರೆ ಅವರು ಪ್ರೀತಿಯಿಂದ ಕೈತುತ್ತು ಇಟ್ಟು ಬೆಳಸಿದ ಆ ಎರಡು ಸಾಕು ನಾಯಿಗಳು ಘಟನೆಯ ವೇಳೆ ತಪ್ಪಿ ಬದುಕುಳಿದಿದೆ. ಬಳಿಕ ಈ ಸಾಕು ನಾಯಿ ತನ್ನವರಿಗಾಗಿ ಎಲ್ಲೆಡೆ ಹುಟುಕಾಟ ನಡೆಸಿರುವ ದೃಶ್ಯ ಮಾತ್ರ ಎಂಥವರ ಕರಗುವಂತೆ ಮಾಡಿದೆ.