ಅಂಕೋಲಾ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ಧಾರಾಕಾರವಾಗಿ ಮಳೆ ಸುರಿದ್ದು ಅಂಕೋಲಾ ಪಟ್ಟಣ ಜಲಾವೃತವಾಗದೆ. ಭಾರೀ ಮಳೆಗೆ ಪಟ್ಟಣದಲ್ಲಿನ ಅಂಗನವಾಡಿ ಒಳಗೆ ನೀರು ನುಗ್ಗಿ ಅಂತಾರ ಉಂಟಾಗಿರುವ ಘಟನೆ ನಡೆದಿದೆ.
- ಡಿ ಕೆ ಶಿವಕುಮಾರ ಪಿಎಸ್ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
- ಉತ್ತರ ಕನ್ನಡದಲ್ಲಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ಏಕಾಂತ ಪೂಜೆ
- ಮಹಿಳಾ ಪೊಲೀಸ್ ಅಧಿಕಾರಿ ಕುತ್ತಿಗೆಯಿಂದ 60 ಗ್ರಾಂ ಚಿನ್ನ ಎಗರಿಸಿದ ಕಳ್ಳ
ನಗರದ ರಸ್ತೆಯ ತುಂಬೆಲ್ಲಾ ನೀರು ನಿಂತು ಸಂಚಾರ ಅಸ್ಥವ್ಯಸ್ಥವಾಗಿತ್ತು. ಏಕಾಏಕಿ ತಗ್ಗು ಪ್ರದೆಶಕ್ಕೆ ನೀರು ನುಗ್ಗಿದ್ದರಿಂದ ಕೆಲಕಾಲ ಸಂಕಷ್ಠದ ಪರಿಸ್ಥಿತಿ ತಂದೊಡ್ಡಿತ್ತು. ಈ ವೇಳೆ ಕಾಲುವೆಯಲ್ಲಿ ನೀರು ಹರಿಯದೇ ಅಂಗನವಾಡಿಯ ಒಳಗೆ ನುಗ್ಗಿದೆ. ಅದೃಷ್ಟವಶಾತ್ ಮಕ್ಕಳು ಮನೆಗೆ ಹೋಗಿದ್ದರಿಂದ ಹೆಚ್ಚಿನ ಅನಾಹುತತಪ್ಪಿದ್ದು ಅಂಗನವಾಡಿಯ ಸಿಬ್ಬಂದಿಯು ನೀರು ತೆಗೆಯಲು ಹರ ಸಾಹಸ ಪಟ್ಟರು. ಇನ್ನು ಕರ್ನಾಟಕದ ಕರಾವಳಿಯಲ್ಲಿ ಮುಂದಿನ 5 ದಿನ ಭಾರೀ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.





