suddibindu.in
ಕುಮಟಾ: ಉತ್ತರಕನ್ನಡ ಜಿಲ್ಲೆಯ ಖ್ಯಾತ ಉದ್ದಿಮೆದಾರರಾಗಿದ್ದ(Businessman) ರಮೇಶ ನಾಯಕ ತೊರ್ಕೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಾಗಿ ನಿನ್ನೆ ನಿಧನರಾಗಿದ್ದಾರೆ.
ಮೃತ ರಮೇಶ ನಾಯಕ ಅವರಿಗೆ (70) ವರ್ಷವಾಗಿದ್ದು, ಅವರು ಕಳೆದ ಅನೇಕ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಚಿಕಿತ್ಸೆಗಾಗಿ ಮಂಗಳೂರು(Mangalore,) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಇದನ್ನೂ ಓದಿ
- ಕಣ್ಣೀರಿನೊಂದಿಗೆ ಶಿರಾಲಿಗೆ ವಾಪಸ್ ಆದ ರಶ್ಮಿ ಕುಟುಂಬ
- ಮದುವೆ ನಿಶ್ಚಯವಾಗಿದ್ದ ಯುವತಿಯ ಜೀವ ಕಸಿದ ಬಸ್ ದುರಂತ
- ಅರಣ್ಯ ಇಲಾಖೆ ವಿರುದ್ಧ ಅನಂತಮೂರ್ತಿ ಹೆಗಡೆ ಗರಂ
ಇವರು ಕಳೆದ ಸರಿಸುಮಾರು 50ವರ್ಷಗಳಿಂದ ಜಿಲ್ಲೆಯಲ್ಲಿ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿಕೊಂಡು ಬಂದಿದ್ದಾರೆ. ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದರು, ಮೃತರು ಮಡದಿ,ಮಗಳು ಹಾಗೂ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ತೊರ್ಕೆಯಲ್ಲಿ ಇಂದು 10-30ಕ್ಕೆ ನಡೆಯಲಿದೆ.





