suddibindu.in
ಭಟ್ಜಳ : ನನ್ನ ಎದುರು ಚುನಾವಣೆ ಸ್ಪರ್ಧೆ ಮಾಡುವ ಬಿಜೆಪಿ ಆಕಾಂಕ್ಷಿಗಳಿದ್ರೆ ಬನ್ನಿ ಈಗಲೆ ಬನ್ನಿ ಧಮ್ ಇದ್ರೆ ಬನ್ನಿ ಎಂದು ಕುರ್ಚಿ ಎತ್ತಿ ಹಿಡಿದು ಬಿಜೆಪಿಗರಿಗೆ ಸಂಸದ ಅನಂತ ಕುಮಾರ್ ಹೆಗಡೆ (Anantakumar Hegde) ಸವಾಲು ಎಸೆದಿದ್ದಾರೆ.
ಭಟ್ಕಳದ (Bhatkala) ಮಾವಳ್ಳಿಯಲ್ಲಿ ನಡೆದ ಬಿಜೆಪಿ(BJP) ಕಾರ್ಯಕರ್ತರ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ವೇಳೆ ಕುರ್ಚಿ ಮೇಲೆತ್ತಿಟ್ಟ ಸಂಸದ ಅನಂತಕುಮಾರ ಹೆಗಡೆ ತಮ್ಮದೇ ಪಕ್ಷದ ಕಾರ್ಯಕರ್ತರ ದೈರ್ಯ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
ತಾನು ಇರೊವರೆಗು ತನ್ನ ಉತ್ತರಕುಮಾರ ಯಾರಿಲ್ಲ ಎಂಬಂತೆ ಹೂಂಕರಿಸಿದ್ದಾರೆ. ಧಮ್ ಇದ್ರೆ ಬನ್ನಿ ಇಲ್ಲಿ ಕುಳಿತುಕೊಳ್ಳಿ ಮತ್ತೊಮ್ಮೆ ತಾನೇ ಅಭ್ಯರ್ಥಿ ಎಂದು ಬಿಂಬಿಸಿದ್ದಾರೆ. ಇದರಿಂದಾಗಿ ಕಾರ್ಯಕ್ರಮದಲ್ಲಿದ್ದ ಕಾರ್ಯಕರ್ತರು, ಮುಖಂಡರು.ಮುಜುಗರಕ್ಕೆ ಒಳಗಾಗುವಂತಾಗಿದೆ.