suddibindu.in
ಯಲ್ಲಾಪುರ : ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election,) ನಾನು ಓಟ್ ಮಾಡದೆ ಇರುವುದರಿಂದ ಏನು ಭಾರೀ ಬದಲಾವಣೆ ಏನು ಆಗಿಲ್ಲ. ನನಗೆ ವೋಟ್ ಹಾಕಲು ಆಗಲಿಲ್ಲ ಅಂತ ಬೇಸರ ಇದೆ. ನಾನು ಯಾರಿಗೊ ಹೆದರಿಕೊಂಡಾಗಲಿ ಅಥವಾ ಬೇರೆ ಯಾವುದೇ ಉದ್ದೇಶದಿಂದ ಮತದಾನ ಮಾಡದೆ ದೂರು ಉಳಿದುಕೊಂಡಿಲ್ಲವೆಂದು ಶಾಸಕ ಶಿವರಾಮ ಹೆಬ್ಬಾರ್ (Shivaram Hebbar) ಹೇಳಿದ್ದಾರೆ.
- ಖಾಸಗಿ ಬಸ್-ಲಾರಿ ಅಪಘಾತ : ಅಪಾಯದಿಂದ ಪಾರಾದ ಪ್ರಯಾಣಿಕರು
- ಜೂನ್ 25ಕ್ಕೆ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ
- ಅನಂತಕುಮಾರ ಹೆಗಡೆ ಗನ್ ಮ್ಯಾನ್ ಅಮಾನತ್
ಅವರು ಇಂದು ಯಲ್ಲಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ.ನನ್ನ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿರೋ ಕಾರಣ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದರು. ಹೋಗಬೇಕು ಅಂದಕೊಂಡಿದ್ದೆ ಆದರೆ ಆರೋಗ್ಯದ ಸಮಸ್ಯೆಯಿಂದ ಸಾಧ್ಯವಾಗಿಲ್ಲ. ಮತದಾನ ಮಾಡದೆ ಇರುವ ಬಗ್ಗೆ ಬೇಸರ ಇದೆ ಎಂದು ಹೆಬ್ಬಾರ್ ಹೇಳಿದರು.
ಜೆಡಿಎಸ್(jds) ಅವರು ತಮ್ಮ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ ಅಂತ ತೋರಿಸಲುಕೊಳ್ಳಲು ಅಭ್ಯರ್ಥಿ ಹಾಕಿದ್ದರು ಅಷ್ಟೇ ನಾನು ಯಾರಿಗೂ ಹೆದರಿ ಬೆದರಿ ಮತದಾನಕ್ಕೆ ಹೋಗದೆ ಉಳಿದುಕೊಂಡಿಲ್ಲ.ಆ ಅವಶ್ಯಕತೆಯೂ ತನಗಿಲ್ಲ. ಅಲ್ಲದೇ, ರಾಜ್ಯ ರಾಜಕಾರಣದಲ್ಲಿ ಎಲ್ಲವನ್ನು ಎದುರಿಸಲು ಸಿದ್ಧ. ಕಾನೂನು ಹೋರಾಟ ಆಗಿರಲಿ ಅಥವಾ ರಾಜಕೀಯ ವಿಷಯ ಆಗಲಿ. ನಿನ್ನೆಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಬೇಕಿತ್ತು ನೀಡಿದ್ದೇನೆ. ತನಗೆ ಬಿಜೆಪಿ ಸ್ವ-ಪಕ್ಷದ ಮೇಲೆ ಅಸಮಾಧಾನ ಇದೆ. ತನ್ನನ್ನ ಸ್ಥಳೀಯ ಬಿಜೆಪಿ ನಾಯಕರು ಸೋಲಿಸಲು ಪ್ರಯತ್ನ ಪಟ್ಟರು. ಇದನ್ನ ಹೈಕಮಾಂಡ್ ಗಮನಕ್ಕೂ ತಂದಿದ್ದೇನೆ. ಆದರೆ ಯಾವುದೇ ಕ್ರಮ ಇಲ್ಲ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ ಸದ್ಯ ಯಾವುದೇ ಕಾರಣಕ್ಕೂ ತಾನು ಬಿಜೆಪಿ(BJP) ಬಿಟ್ಟು ಹೋಗಲ್ಲ. ಬಿಜೆಪಿಗೆ ರಾಜೀನಾಮೆ ಕೊಡುವ ಪ್ರಮೇಯ ಬಂದಿಲ್ಲ. ಮುಂದೆ ಏನು? ಹೇಗೆ? ರಾಜಕಾರಣ ಬದಲಾದಣೆ ಆಗುತ್ತೆ ಅಂತ ಕಾದು ನೋಡೋಣಾ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಹೆಬ್ಬಾರ್ ಅಲ್ಲೆಗೆಳೆದಿದ್ದಾರೆ.