ಸುದ್ದಿಬಿಂದು ಬ್ಯೂರೋ

ಕುಮಟಾ: ಭಾರೀ ಮಳೆಯಿಂದಾಗಿ ಕೊಚ್ಚಿಹೋಗಿದ್ದ ಬೆಟ್ಕುಳಿ ಗ್ರಾಮದ ಎರಡು ಕುಟುಂಬಕ್ಕೆ ಕಂದಾಯ ಸಚಿವ ಕೃಷ್ಣಭೈರೆ ಗೌಡ ಅವರು ಭೇಟಿ ನೀಡಿ ಮೃತ ಎರಡು ಕುಟುಂಬಕ್ಕೆ ಸಾಂತ್ವಾನ ನೀಡಿ ತಲಾ ಐದು ಲಕ್ಷ ರೂಪಾಯಿ ಪರಿಹಾರದ (compensation)ಚೆಕ್‌ ನೀಡಿದರು.

ಸತೀಶ ಪಾಂಡುರಂಗ ನಾಯ್ಕ ಹಾಗೂ ಉಲ್ಲಾಸ ಗೌವಡಿ ಎಂಬುವವರು ಕೃಷಿ ಕೆಲಸಕ್ಕೆ ಹೋಗಿದ್ದ ವೇಳೆ ಭಾರೀ ಮಳೆಯಿಂದಾಗಿ ಇಬ್ಬರೂ ಮೃತಪಟ್ಟಿದ್ದು,ಇವರಿಬ್ಬರೂ ಗದ್ದೆ ಕೆಲಸಕ್ಕೆ ಹೋಗಿದ್ದು, ಈ ವೇಳೆ ಭಾರೀ ಮಳೆ ಸುರಿಯುತ್ತಿರುವುದರಿಂದಾಗಿ ಇಬ್ಬರೂ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಮೃತರ ಕುಟುಂಬದವರ ಮನೆಗೆ ಭೇಟಿ ನೀಡಿದ ಸಚಿವರು ಎರಡು ಕುಟುಂಬಕ್ಕೆ ತಲಾ ಐದು ಲಕ್ಷ ಪರಿಹಾರದ ಚೆಕ್‌ ನೀಡಿದರು, ಬಳಿಕ ಮಾಧ್ಯಮದವರ ಜೊತೆಗೆ ಮಾತ್ನಾಡಿದ ಸಚಿವರು ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ, ಆದರೆ ಕೆಲ ಜಿಲ್ಲೆಗಳಲ್ಲಿ ಇನ್ನೂ ಕೂಡ  ಸರಿಯಾಗಿ ಮಳೆಯಾಗಿಲ್ಲ, ಈ ತಿಂಗಳ ಕೊನೆಯವಾರದವರಗೆ ನೋಡಿ ಮೋಡ ಬಿತ್ತನೆ ಮಾಹಿತಿ ಪಡೆದುಕೊಳ್ಳಲಾಗುವುದು,

ಕರಾವಳಿ ಭಾಗದಲ್ಲಿ ಮಳೆಯಿಂದಾಗಿ ಸಾಕಷ್ಟು ಅವಾಂತರವಾಗಿದೆ.ಮಳೆಯಿಂದಾಗಿ ರಾಜ್ಯದಲ್ಲಿ ೨೧ ಜನ ಮೃತಪಟ್ಟಿದ್ದಾರೆ.ಮಂಗಳೂರು ೬, ಉಡುಪಿ ೪,ಉತ್ತರಕನ್ನಡಲ್ಲಿ ೩ ಮಂದಿಗೆ ಮಳೆಯಿಂದಾಗಿ ಮೃತಪಟ್ಟಿದ್ದು, ೪೭ ಜಾನುವಾರುಗಳು ಸಾವನ್ನಪ್ಪಿದ್ದು,ಸಾಕಷ್ಟು ಮನೆಗಳಿಗೂ ಹಾನಿ ಉಂಟಾಗಿದೆ. ಮನೆ ಹಾನಿ ಒಳಗಾದವರಿಗೂ ಸಹ ಸರಕಾರದಿಂದ ಪರಿಹಾರ ನೀಡಲಾಗುವು ಎಂದರು.

ಜಿಲ್ಲೆಯಲ್ಲಿ ಹೆದ್ದಾರಿ ಕಾಮಗಾರಿ ಸೇರಿದಂತೆ ಕೆಲ ಕಾಮಗಾರಿಗಳಿಂದಾಗಿ ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗುತ್ತಿದೆ, ಈ ಬಗ್ಗೆ ಸಹ ಮಾಹಿತಿ ಪಡೆದುಕೊಂಡಿದ್ದು, ಯಾವೇಲ್ಲಾ ಕಂಪನಿಗಳಿಂದಾಗಿ ಸಮಸ್ಯೆ ಉಂಟಾಗುತ್ತಿದೆ. ಅಂತಹವರ ಮೇಳೆ ಸೂಕ್ತ ಕ್ರಮ ಜಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,ಅದರಲ್ಲಿ ಯಾವುದೇ ಮುಲ್ಲಾಜಿಲ್ಲ ಎಂದಿದ್ದಾರೆ.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ , ಕುಮಟ ಶಾಸಕ ದಿನಕರ ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.